ಬುಧವಾರ, ಏಪ್ರಿಲ್ 22, 2015

What(not) to Do on a Trek



By now, i have conquered more than 15 peaks of Karnataka and ready for my first adventure with the Great Himalayas!

These treks have shown me what mother nature offers us! every trek has been challenging and different in its own way!

Some treks are short but tiring, some are lengthy and scary! above all, reaching peak of a mountain and experiencing chill wind is a different experience all together.

From being Debutant trekker in Jan 2009 - Kodachadri Trek to Meruthi Parvatha in 2015 Jan, i have seen first time trekkers going through a lot of difficulties before/during treks.

So, i though of noting down a few inputs for the First timers.

Start walking, Exercising for a couple of hours at least a week before the trek.
A good pair of shoes is a must. i have done a couple of treks with Sparx sandals and injured leg badly. so always wear proper shoes. Quechua offers many shoes Forclaz 50, Forclaz 100, Forclaz 500.. buy one based on the necessity.

A Regular sized Backpack with good Back and support should do. Quechua and Wildcraft are the best options.

Never wear Jeans on a trek, as you get sweat, Jeans will rub against your skin and rashes happen. Wear comfortable shorts, Track pants with enough space for air movement.

Carry enough water. keep you hydrated! eat lots of Musambi, Oranges during trek. these fruits keeps you away from getting cramps.

Avoid breathing through mouth. Breathing through mouth tires you a lot. instead keep breathing from nostrils, you will feel the difference as you climb.

Use a walking stick. its an added grip while you climb/descend.

Start early. starting early avoids trekking under hot sun for a longer time. give enough breaks.

Always have an experienced trekker at the sweeping end. when in doubt about the path, wait for the whole team.

Never venture into forests alone.

If you start a campfire, make sure it doesn't spread. clean the place before you leave.

don't throw plastic bottles, covers during a trek.

Bring back only good memories with you, Don't spoil the mother nature!!

Expect More, Prepare for the Worst! Until you are not on the summit, you are not There!!

ಗುರುವಾರ, ಏಪ್ರಿಲ್ 2, 2015

ನಮ್ಮ ದೇಶರ ಹೆಸರುಗಳಮೇಲೆ ವಿದೇಶಿಯರ ಆಕ್ರಮಣ

ನಮಸ್ಕಾರ, ಈ ನನ್ನ ಲೇಖನ ಯಾವುದೇ ಧರ್ಮದ, ಭಾಷೆಯ ಜನರ ಮನಸ್ಸನ್ನು ನೋಯಿಸುವ ಉದ್ದೇಶದಿಂದ ಬರೆದಿದ್ದಲ್ಲ. ಕೇವಲ ಭಾರತದ ಹಿರಿಮೆ, ಸಂಸ್ಕೃತಿ,  ನಂಬಿಕೆಯ ಮೇಲೆ ಅನ್ಯರ ಆಕ್ರಮಣದ ಪ್ರಭಾವವನ್ನು ವಿವರಿಸುವುದು ಅಷ್ಟೇ.

ಸುಮಾರು ಎರಡುಸಾವಿರ ವರ್ಷಗಳಿಂದ ಭಾರತ ನಿರಂತರ ಧಾಳಿಗೊಳಗಾಡಿದೆ. ಆಂಗ್ಲರು, ಪೋರ್ಚುಗೀಸರು, ಡಚ್ಚರು, ಫ್ರೆಂಚರು, ಇಸ್ಲಾಂ ಆಕ್ರಮಣಕಾರರು, ಆರಬ್ಬರು ಹೀಗೆ ವಿವಿಧ ಕಾಲಘಟ್ಟದಲ್ಲಿ ಸಮಯ ದೊರೆತಾಗಲೆಲ್ಲಾ ಆಕ್ರಮಣಗೈದಿದ್ದಾರೆ. ಲೂಟಿ ಹೊಡೆದಿದ್ದಾರೆ. ಮತಾಂತರ, ನಾಮಾಂತರ ಮಾಡಿದ್ದಾರೆ.

ಭಾರತವನ್ನು ಆಂಗ್ಲ ಭಾಷೆಯಲ್ಲಿ ಇಂಡಿಯಾ ಅಂತ ಕರೀತೀವಿ. ಅದಕ್ಕೆ ಕಾರಣ ಅಲೆಗ್ಸ್ಯಾಂಡರ್ ದಿ ಗ್ರೇಟ್. ಕ್ರಿಸ್ತ ಪೂರ್ವ 326 ರಲ್ಲಿ ಭಾರತದಮೇಲೆ ಆಕ್ರಮಣ ಮಾಡಿದ ಅಲೆಗ್ಸ್ಯಾಂಡರ್, ಭಾರತದ ವಾಯುವ್ಯದಲ್ಲಿ ಹರಿಯುತ್ತಿದ್ದ ಸಿಂಧೂ ನದಿಯನ್ನ ನೋಡಿದ. ಅವನಿಗೆ ಅದರ ಹೆಸರು ಉಚ್ಚಾರ ಮಾಡಲಿಕ್ಕೆ ಆಗ್ಲಿಲ್ಲ. ಅವನು ಸಿಂಧೂ ನದಿಯನ್ನ ಇಂಡೋಸ್ ಎಂದು ಕರೆದ. ಸಿಂಧೂ ಅಂದ್ರೆ ಮಂಗಳಕರ ಅಂತ. ಕೊನೆಗೆ ಇಂಡೋಸ್ ಹೋಗಿ, ಇಂಡಸ್, ಇಂಡಿಯಾ ಆಯ್ತು. ಭರತನ ಹೆಸರಿನಿಂದ ಕರೆಯಲ್ಪಡುವ ಭಾರತ ಅನ್ಯರ ಧಾಳಿಯಿಂದ ಇಂಡಿಯಾ ಆಯ್ತು.

ಕಾಳಿದಾಸನ ಕುಮಾರಸಂಭವದ ಮೊದಲ ಶ್ಲೋಕ ಹಿಮಾಲಯದ ವರ್ಣನೆಗೆ ಮೀಸಲು.

ಅಸ್ಥುತ್ತರಸ್ಯಾಮ್  ದಿಶಿ ದೇವತಾತ್ಮಾ ಹಿಮಾಲಯೊ ನಾಮ ನಗಾಧಿರಾಜಃ|
ಪೂರ್ವಾಪರೌ ತೋಯನಿಧಿವಗಾಹ್ಯ ಸ್ಥಿತ ಪೃಥಿವ್ಯಾ ಇವ ಮಾನದಂಡಃ ||

ಉತ್ತರದಲ್ಲಿರುವ ಪರ್ವತಗಳ ರಾಜ ಹಿಮಾಲಯ ಭೂಮಿಯ ಅಳತೆಗೋಲಂತೆ.

ಇಂಥ ಹಿಮಾಲಯದಲ್ಲಿರುವ ಪ್ರಪಂಚದ ಅತ್ಯಂತ ಎತ್ತರ ಪರ್ವತ, ಮೌಂಟ್ ಎವರೆಸ್ಟ್. ಮೌಂಟ್ ಎವರೆಸ್ಟ್ ಗೆ ನಮ್ಮ ಪೂರ್ವಜರು ಕರೆದಿದ್ದು ಸಾಗರಮಾತ ಅಂತ. ಸಾಗರಮಾತ ಅಂದ್ರೆ ಪರ್ವತಗಳ ರಾಜ, ಗೌರೀಶಂಕರ ಅನ್ನೋ ಹೆಸರಿಂದನೂ ಕರೀತೀವಿ. 28 ಸಾವಿರಕ್ಕೂ ಅಡಿ ಎತ್ತರವಿರುವ ಕಾಂಚನಗಂಗ 3ನೇ ಎತ್ತರದ ಪರ್ವತ. ಇದು ಅನ್ಯರ ಬಾಯಲ್ಲಿ ಕಾಂಚನಜುಂಗಾ ಆಯ್ತು.

ಭಾರತದ ಅಕ್ಕ ಪಕ್ಕದಲ್ಲಿರುವ ಬಂಗಾಳ ಕೊಲ್ಲಿ ಮತ್ತು ಅರಬ್ಬೀ ಸಮುದ್ರಕ್ಕೆ ನಮ್ಮ ಪೂರ್ವಜರು ಇಟ್ಟಿದ್ದ ಹೆಸರು ರತ್ನಾಕರ ಮತ್ತು ಮಹೋದಧಿ. ರತ್ನಾಕರ ಅರಬ್ಬೀ ಸಮುದ್ರ ಆದ್ರೆ, ಮಹೋದಧಿ ಬಂಗಾಳ ಕೊಲ್ಲಿ ಆಯ್ತು.

ಬಂಗಾಳದ ಕಾಲಿಘಾಟ್ ಕಲ್ಕತ್ತಾ ಆಗಿದೆ. ಶಿವನ ಶಕ್ತಿಪೀತ ದುರ್ಜಯಲಿಂಗ ಡಾರ್ಜೀಲಿಂಗ್ ಆಗಿದೆ.

ಇನ್ನು ನಮ್ಮ ಕರ್ನಾಟಕದ ಮಟ್ಟಿಗೆ ಹೇಳೋದಾದ್ರೆ ಪೋರ್ಚುಗೀಸರ ಪ್ರಭಾವದಿಂದ ಕನ್ನಡ  ಕೆನರಾ ಆಯ್ತು. ಅವಿಭಜಿತ ಕನ್ನಡ ಜಿಲ್ಲೆ ಸೌತ್ ಕೆನರಾ ಮತ್ತು ನಾರ್ತ್ ಕೆನರಾ ಆಯ್ತು. ಬ್ರಿಟೀಷರ ವಶದಲ್ಲಿದ್ದ ಕೊಡಗು ಕೂರ್ಗ್ ಆಯ್ತು, ಮಡಿಕೇರಿ ಮಾರ್ಕೇರಾ ಆಯ್ತು.

ಇಸ್ಲಾಂ ಆಕ್ರಮಣಕಾರರ ದೌರ್ಜನ್ಯಕ್ಕೆ ಒಳಪಟ್ಟ ಸಕಲೇಶಪುರ ಮಂಜರಾಬಾದ್ ಆಯ್ತು. ಮಹಾರಾಷ್ಟ್ರದ ಧಾರಶಿವ ಉಸ್ಮಾನಾಬಾದ್ ಆಯ್ತು. ಆಂದ್ರದ ಪಾಳಾಮೋರ್ ಮೆಹ್ಬೂಬ್ನಗರ್ ಆಗಿ ಬದಲಾಯ್ತು. ಬೀದರ್ನ ಜಯಸಿಂಹಪುರ ಹುಮ್ನಾಬಾದ್ ಆಗಿದೆ. ಆಂದ್ರದ ರಾಜಧಾನಿ ಹೈದೆರಾಬಾದ್ ಗೆ ಮೊದಲಿದ್ದ ಹೆಸರು ಭಾಗ್ಯನಗರ. ದೇವಗಿರಿ ದೌಲತಾಬಾದ್, ರಾಮಾಗಢ ಅಲೀಗಢ್ ಆಗಿದೆ. ಅಕ್ಬರ್‌ನಿಂದ ಪ್ರಯಾಗ ಅಲ್ಲಹಾಬಾದ್ ಆಯ್ತು. ಕಾಶಿ ಔರಂಗಜೇಬ್ ನಿಂದ ಮಹಮ್ಮದಾಬಾದ್ ಆಯ್ತು. ಅಯೋಧ್ಯೆ ಫೈಜ಼ಾಬಾದ್ ಆಯ್ತು. ರಾಮನ ಮಗನ ರಾಜಧಾನಿ ಲವಪುರ ಲಾಹೋರ್ ಆಗಿ ಬದಲಾಯ್ತು. ಗಾಂಧಾರ ಕಂದಾಹರ್ ಆಗಿದೆ. ಕೃಷ್ಣನ ಇಂದ್ರಪಸ್ತ ದೆಹಲಿ ಆಗಿ ಬದಲಾಗಿದೆ.

ಭಾರತದ ಪ್ರತಿಯೊಂದು ಸ್ಥಳಕ್ಕೊ ಅದರದೇ ಆದ ಒಂದು ಹಿನ್ನಲೆ, ಸಂಸ್ಕೃತಿ ಇದೆ, ಹೆಸರಿಗೆ ಒಂದು ಅರ್ಥ, ಕಾರಣ ಇದೆ. ಇಷ್ಟೆಲ್ಲ ಆಕ್ರಮಣದ ನಡುವೆಯೂ ಭಾರತ ತನ್ನ ಸಂಸ್ಕೃತಿಯನ್ನು ಜತನದಿಂದ ಕಾಪಾಡಿಕೊಂಡಿದೆ. ಹೆಸರು ಬದಲಾದರೂ ಹಿನ್ನಲೆ ಬದಲಾಗುವುದಿಲ್ಲವಲ್ಲ. ಅನ್ಯರ ಧಾಳಿಯಿಂದ ಬದಲಾದ ಹೆಸರುಗಳನ್ನು ಮರುನಾಮಕರಣ ಮಾಡಬೇಕಿದೆ.

ಮೇಲಿನ ವಿವರಣೆ ಶ್ರೀ ವಿದ್ಯಾನಂದ ಶೆಣ್ಯೆ ರವರ ಭಾರತ ದರ್ಶನದಿಂದ ಸ್ಪೂರ್ತಿ ಪಡೆದಿದ್ದು. ಅಂತಹ ಮಹಾನುಭಾವರ ಪದಚರಣಕ್ಕೆ ನನ್ನ ನಮನಗಳು. 

ಸೋಮವಾರ, ಮಾರ್ಚ್ 30, 2015

ಡೆತ್ ವ್ಯಾಲೀಯ ಚಲಿಸುವ ಕಲ್ಲುಗಳು - Moving Stones of Death valley.

ಉತ್ತರ ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಡೆತ್ ವ್ಯಾಲೀ ನ್ಯಾಶನಲ್ ಪಾರ್ಕ್ ಇದೆ. ಅಲ್ಲಿ ರೇಸ್ ಟ್ರ್ಯಾಕ್ ಪ್ಲಾಯ (RaceTrack Playa) ಜಾಗದಲ್ಲಿ ಒಂದು ಕುತೂಹಲ ನೆಡೆಯುತ್ತೆ. ಹೆಸರಿಗೆ ತಕ್ಕಂತೆ ಕಲ್ಲುಗಳು ನುಣುಪಾದ ಭೂಮಿಯ ಮೇಲ್ಮಯ್ನಲ್ಲಿ ಚಲಿಸುತ್ತವೆ. ಡೆತ್ ವ್ಯಾಲೀ ಎಷ್ಟು ಭಯಂಕರ ಮರಳುಗಾಡು ಅಂದ್ರೆ ಅಲ್ಲಿ ವರ್ಷಕ್ಕೆ ಮಳೆಯಾಗೋದು ಕೇವಲ 2 ಇಂಚು, ಬೇಸಿಗೆಯಲ್ಲಿ ತಾಪಮಾನ 50 ಡಿಗ್ರೀ ಮುಟ್ಟೋದು ತುಂಬಾ ಸಾಮಾನ್ಯ. ಇಂಥ ಜಾಗದಲ್ಲಿ ಕಲ್ಲುಗಳು ಯಾವುದೇ ಬಾಹ್ಯ ಬಾಲಪ್ರಯೋಗವಿಲ್ಲದೆ ಚಲಿಸುತ್ತವೆ. 

ಕಲ್ಲುಗಳ ಗಾತ್ರ ಕೆಲವು ಸೆಂಟಿಮೀಟರ್ ನಿಂದ ಹಿಡಿದು ಹಲವು ಅಡಿಗಳವರೆಗೂ ಇರುತ್ತವೆ. ಈ ಕಲ್ಲುಗಳು ನೇರವಾಗಿ ಅಥವಾ ಜ಼ಿಗ್‌ಜ಼ಾಗ್ ಶೈಲಿಯಲ್ಲಿ ಚಲಿಸುತ್ತವೆ. ಕೆಲವು ಕಲ್ಲುಗಳು ದಿಕ್ಕು ಬದಲಾಯಿಸಿ ಚಲಿಸಿದ ಉದಾಹರಣೆಗಳೂ ಇವೆ. ಒಮ್ಮೊಮ್ಮೆ ಎರಡು ಕಲ್ಲುಗಳು ಅಕ್ಕ ಪಕ್ಕ ಚಲಿಸಿ, ಸ್ವಲ್ಪ ದೂರದ ನಂತರ ಒಂದು ಕಲ್ಲು ದಿಕ್ಕು ಬದಲಾಯಿಸಿದ್ದೂ ಇದೆ. ಕಲ್ಲು ಚಲಿಸುವಾಗ ಅದು ಸಾಗಿ ಬಂದ ದಾರಿ ಹಲವು ತಿಂಗಳಾದರೂ ಅಳಿಸದೆ ಉಳಿದಿರುತ್ತವೆ. 
ರೇಸ್ ಟ್ರ್ಯಾಕ್ ನಲ್ಲಿ ವಾಹನಗಳು ಚಲಿಸಿದಂತೆ ಇಲ್ಲಿ ಕಲ್ಲುಗಳು ಅಕ್ಕ ಪಕ್ಕ ರೇಸ್ ಹೊರಟಂತೆ ಕಾಣುತ್ತವೆ.
ಇದರ ಬಗ್ಗೆ ಮೊದಲು ರಿಸರ್ಚ್ ನೆಡೆದಿದ್ದು 1915 ರಲ್ಲಿ. ಮೊದಲಿಗೆ ಜೊಸೆಫ್ ಕ್ರುಕ್ ಎಂಬಾತ ಈ ವಿದ್ಯಮಾನವನ್ನು ಗಮನಿಸಿದ. ನಂತರ 1948ರಲ್ಲಿ ಇಬ್ಬರು ಭೂವಿಜ್ಞಾನಿಗಳು ಈ ಸ್ಥಳವನ್ನು ಪರೀಕ್ಷೆ ಮಾಡಿ ಜಿಯೊಲಾಜಿಕ್ ಸೊಸೈಟೀ ಆಫ್ ಅಮೇರಿಕದಲ್ಲಿ ಪ್ರಕಟಿಸಿದರು. ಹೀಗೆ ಸುಮಾರು 90 ವರ್ಷಗಳ ಕಾಲ ಈ ವಿದ್ಯಮಾನ ಒಂದು ಒಗಟಾಗೇ ಉಳಿದಿತ್ತು. 2013 ಡಿಸೆಂಬರ್ ನಲ್ಲಿ ಲೊರೆಂಜ಼್ ಮತ್ತು  ನಾರಿಸ್ ಮತ್ತವರ ತಂಡ ಈ ಕೌತುಕವನ್ನು ಕಣ್ಣಾರೆ ಕಂಡರು. 

ಮಿಲ್ಕೀವೇ ಗ್ಯಾಲಕ್ಸೀ ಮತ್ತು ಚಲಿಸುವ ಕಲ್ಲುಗಳು.
ಡಿಸೆಂಬರ್ 2013 ರಲ್ಲಿ ಚಳಿಗಾಲದ ಒಂದು ದಿನ ನೀರು ನಿಂತಿತ್ತು, ರಾತ್ರಿ ಆ ನೀರು ಹೆಪ್ಪು ಗಟ್ಟಿ 3 ಇಂಚು ದಪ್ಪದ ಐಸ್ ಪದರವಾಗಿ ಮಾರ್ಪಟ್ಟಿತ್ತು. ಬೆಳಗಾಗುವಾಗ ಐಸ್ ಕರಗಲು ಶುರುವಾದೊಡನೆ ಕಲ್ಲುಗಳು ಚಲಿಸಲು ಶುರುವಾಯ್ತು. ಐಸ್ ಕರಗಿದಂತೆಲ್ಲ ಕಲ್ಲುಗಳು ಚಲಿಸಿದವು. ಒಂದೊಂದು ಕಲ್ಲು ಒಂದೊಂದು ದಿಕ್ಕಿನಲ್ಲಿ ಚಲಿಸಿದವು. ನಿಮಿಷಕ್ಕೆ ಕೆಲವು ಸೆಂಟಿಮೀಟರ್ ನಿಂದ ಹಿಡಿದು, ಕೆಲವು ಇಂಚುಗಳವರೆಗೆ ಚಲಿಸಿದುವು. ಜೊತೆಯಲ್ಲಿ 10-16 ಕಿಲೋಮೀಟರ್ ವೇಗದಲ್ಲಿ ಬೀಸುವ ಗಾಳಿ ಕಲ್ಲುಗಳನ್ನು ತಳ್ಳುತ್ತಿತ್ತು. ಕೆಲವು ಕಲ್ಲುಗಳಂತೂ 200 ಅಡಿಗೂ ಹೆಚ್ಚು ಚಲಿಸಿದುವು.
ಕೊನೆಗೂ ಚಲಿಸುವ ಕಲ್ಲುಗಳ ವಿಲಕ್ಷಣ ನಡುವಳಿಕೆಯ ರಹಸ್ಯ ಬಯಲಾಯ್ತು.

ಆದರೂ ನಾರಿಸ್ ಮತ್ತು ಲೊರೆಂಜ಼್ ಪ್ರಕಾರ ಅವರ ಅನ್ವೇಷಣೆ ಇನ್ನೂ ಮುಗಿದಿಲ್ಲ. ಅವರಿಗೆ ಗೋಚರವಾಗದ್ದೂ ಇನ್ನೂ ಏನೋ ಇದೆ ಅಂತ ಅವರ ಅನಿಸಿಕೆ.  ಒಟ್ಟಿನಲ್ಲಿ ಭೂಮಿ ನಮ್ಮ ಅರಿವಿಗೆ ಬಾರದ ಎಷ್ಟೋ ಕೌತುಕಗಳನ್ನು ತನ್ನ ಮಡಿಲಿನಲ್ಲಿ ಬಚ್ಚಿಟ್ಟುಕೊಂಡಿದ್ದಾಳೆ. ಇದನ್ನೆಲ್ಲ ಅರಿಯಲು ಅದೆಷ್ಟು ಯುಗಗಳು ಬೇಕಾಗಬಹುದೋ ಏನೋ.


ಶುಕ್ರವಾರ, ಮಾರ್ಚ್ 27, 2015

Punಗತೆ - ಕೊನೇಮನೆ ಗಂಗಜ್ಜಿ

ಎಲ್ಲಾ ಕಥೆ ಹೇಗೆ ಶುರು ಆಗತ್ತೋ ಈ ಕಥೆನೂ ಹಾಗೆ ಶುರುಆಗತ್ತೆ. ಒಂದೂರು, ಊರಿನ ಕೊನೇಮನೆಲಿ ಗಂಗಜ್ಜಿ ಬದುಕಿದ್ಲು. ಗಂಡ ಮಕ್ಳು ಯಾರೂ ಇರ್ಲಿಲ್ಲ. ಕಥೆಗೆ ಅವರ ಅವಶ್ಯಕಥೆನೂ ಇಲ್ಲ ಅಂತ ಇಟ್ಕೊಳಿ.
ಆದ್ರೂ ಅಜ್ಜಿ ಐಶ್ವರ್ಯಕ್ಕೇನೂ ಕಡಿಮೆ ಇರ್ಲಿಲ್ಲ. ಗಂಡ ಮಾಡಿಟ್ಟ ಆಸ್ತಿ ಇತ್ತು, ಊರು ಚಿಕ್ಕದೇ ಆದ್ರೂ ಇದ್ದವ್ರೆಲ್ಲ ಬಡವರೇ. ಅಜ್ಜಿ ಅವ್ರಿಗೆಲ್ಲ ಸಾಲ ಕೊಟ್ಟು ಮೆರೀತಿತ್ತು.

ಇಂಥ ಅಜ್ಜಿ ಒಂದಿನ ಕಣ್ಣು ಮುಚ್ತು. ಸುದ್ದಿ ಊರಿಗೆಲ್ಲ ಹಬ್ಬಿತು. ಊರಿನ ಯುವಕರು ಮಕ್ಳು ಎಲ್ಲ ಸೇರಿದ್ರು. ಎಷ್ಟೇ ಆದ್ರು ನಮಗೆಲ್ಲ ಸಹಾಯ ಮಾಡಿದೋಳು, ಸರಿಯಾಗಿ ಮಣ್ಣು ಮಾಡೋಣ ಅಂತ ಮಾತಾಡ್ಕೊಂಡ್ರು. ಚಟ್ಟ ಅದು ಇದು ತಯಾರಿನೂ ಆಯ್ತು. ಅಷ್ಟು ಹೊತ್ತಿಗೆ ಸೂರ್ಯ ಮುಳುಗಿಹೋದ. ಊರವ್ರಿಗೆಲ್ಲ ಹಸಿವು ನಿದ್ದೆ ಬಂದಿತ್ತು. ಅಜ್ಜಿ ಹೆಣ ಇಲ್ಲೇ ಇರ್ಲಿ, ನಾಳೆ ಮುಂದಿನ ಕಾರ್ಯ ಮಾಡೋಣ, ಯಾರಾದ್ರೂ ಒಬ್ರು ಇಲ್ಲೇ ಇರೋದು ಆಂತ ನಿರ್ಧಾರ ಆಯ್ತು.

ಆದ್ರೆ ಹೆಣದ ಜೊತೆ ಯಾರು ಮಲಗ್ತಾರೆ? ಸಾಲಕ್ಕೆ ನಾ ಮುಂದು ಅಂತಿದ್ದ ಜನ ಆಗ್ಲೇ ಮನೆ ಸೇರ್ಕೊಂಡಿದ್ರು. ಕೊನೇಗೆ ಇನ್ನೊಂದು ಅಜ್ಜಿ ನಾನಿರ್ತೀನಿ, ನೀವೆಲ್ಲ ಬೆಳಗ್ಗೆ ಬೇಗ ಬಂದುಬಿಡಿ ಅಂತ ಅಲ್ಲೇ ಮಲ್ಕೊಳ್ತು.

ಮಧ್ಯರಾತ್ರಿ ಅಜ್ಜಿಗೆ ಯಾಕೋ ಎಚ್ಚರ ಆಯ್ತು. ಹೆಣ ನೋಡ್ತಾಳೆ, ಕತ್ತಲಲ್ಲಿ ಹೆಣ ಅಲುಗಾಡ್ತಾ ಇದೆ. ಘಾಟಿ ಅಜ್ಜಿ ಮೊದಲು ನಂಬ್ಲಿಲ್ಲ. ಸ್ವಲ್ಪ ಹೊತ್ತು ಬಿಟ್ಟು ನೋಡಿದ್ಲು ಹೆಣ ನಿಜವಾಗ್ಲೂ ಅಲುಗಾಡ್ತಾ ಇದೆ. ಅಜ್ಜಿಗೆ ಎದೆ ಧಸಕ್ಕಂತು. ಭಯ ಆಗಿ ಮೈ ಎಲ್ಲ ಬೆವರೋಕೆ ಶುರು ಆಯ್ತು, ಇಲ್ಲಿಗೆ ನನ್ನ ಆಯಸ್ಸು ಮುಗೀತು ಅಂತ ಖಾತರಿ ಆಯ್ತು. ಹಲ್ಲು ಕಟಕಟ ನಡುಕ, ತಲೆ ಕೂದ್ಲೆಲ್ಲ ನಿಂತ್ಕೊಳ್ತು. ಆದ್ರೂ ಯಾಕೋ ನಂಬಿಕೆ ಬರ್ಲಿಲ್ಲ, ಜೀವನದಲ್ಲಿ ದೆವ್ವ ಭೂತ ನಂಬಿದೋಳಲ್ಲ, ಆಗಿದ್ದು ಆಗಿ ಹೋಗ್ಲಿ ಅಂತ ಹೆಣದ ಹತ್ತಿರ ಹೋಗಿ ನೋಡ್ತಾಳೆ, ಹೆಣದ ಕೈ ಅಲುಗಾಡ್ತಾ ಇದೆ. ದೀಪ ಹಾಕಿ ನೋಡ್ತಾಳೆ, ಅವ್ಳ ಮಗ!! ಗಂಗಜ್ಜಿ ಮೈಮೇಲಿರೋ ಒಡವೆ ಕದಿಯೋಕೆ ಬಂದಿದಾನೆ.. ಈ ಅಜ್ಜಿ ಎರಡು ಬಿಟ್ಟು ಉಗಿದು ಮಗನನ್ನ ಮನೆಗೆ ಕಳುಹಿಸ್ತು
ಬೆಳಗಾಯ್ತು,

ಇದೇ ಅಜ್ಜಿ ಮಗ ತಾನೇ ಮೊದಲು ಬಂದು ಗಂಗಜ್ಜಿಯ ಕಾರ್ಯ ಎಲ್ಲ ಮುಗಿಸಿದ. ಅಜ್ಜಿಗೆ ಮಾನ ಉಳಿಸಿದ ಸಮಾಧಾನ ಆದ್ರೆ, ಮಗನಿಗೆ ಸಾರಾಯಿ ಅಂಗಡಿ ಸಾಲ ತೀರಿಸೋ ಅವಕಾಶ ತಪ್ಫೋಯ್ತಲ್ಲ ಅಂತ ಬೇಜಾರಾಯ್ತು.

ಕಿರುಗತೆ - ಶರಣಾಗತಿ


ಮಳೆಗಾಲದ ಒಂದು ಸಂಜೆ. ಹಿಂದಿನ ಜಾವ ಶುರುವಾದ ಆಶ್ಲೇಷ ಮಳೆ ಇನ್ನೂ ನಿಲ್ಲುವ ಲಕ್ಷಣಗಳೇ ಕಾಣುತ್ತಿಲ್ಲ ಸಂಜೆ ಘಂಟೆ ನಾಲ್ಕಾದರೂ ಮನೆಯ ಒಳಗೆ ಕತ್ತಲೂ ಕತ್ತಲು. ಮನೆ ಹಿಂದಿನ ಭೂತದ ಗುಡ್ಡ ಕಪ್ಪಾದ ಮೋಡಗಳಿಂದ ಮುಚ್ಚಿಹೂಗಿತ್ತು.  ಧೋ ಎಂದು ಸುರಿಯುತ್ತಿರುವ ಮಳೆಗೆ ಅಡುಗೆಮನೆಯಿಂದ ರಾಧಮ್ಮ ಕರೆದಿದ್ದು ಮಂಜಪ್ಪನಿಗೆ ಕೇಳಲೇ ಇಲ್ಲ. ಮಳೆಯ ಸದ್ದಿಗೆ ಕೇಳಲಿಲ್ಲವೋ, ಮಂಜಪ್ಪನ ಯೋಚನಾಲಹರಿಯಿಂದ ಕೇಳಲಿಲ್ಲವೋ, ಕೇವಲ ಮಂಜಪ್ಪನಿಗೆ ಮಾತ್ರ ಗೊತ್ತು.
ಮಂಜಪ್ಪ ಆಗತಾನೆ ಶಾನುಭೋಗರ ಮಗ ಬಂದು ಹೇಳಿದ ಸುಧ್ಧಿಯಿಂದ ಕುಸಿದು ಹೋಗಿದ್ದ. ಮಳೆಗಾಲಕ್ಕೆಂದು ಹಾಕಿದ್ದ ಹಳೇ ಅಡಿಕೆ ತಟ್ಟಿಯ ಮಧ್ಯದಿಂದ ಮಳೆನೀರು ಮಂಜಪ್ಪನ ಮುಖದಮೇಲೆ ರಾಚುತ್ತಿದ್ದರೂ ಅದಾವುದರ ಪರಿವೆಯೇ ಇಲ್ಲದಂತೆ ಕೂತಿದ್ದ.
ಒಳಮನೆಯಿಂದ ರಾಧಮ್ಮ ಕಾಪಿ ತಂದುಕೊಟ್ಟು "ಕೇಳ್ತಾ, ಇದೆಂತ ಹಾಳು ಮಳೆ, ದನದ ಕೊಟ್ಟಿಗೆ ಕುಸಿಯೋ ಹಾಗಿದೆ, ಒಂಚೂರು ನೋಡ್ಬಾರ್ದ" ಅಂದಳು.

ಮಂಜಪ್ಪನದು ಮುಗಿಲಗಿರಿ ಕಾಡಿನ ಅರಳಿಬೈಲು ಅನ್ನೋ ಊರಲ್ಲಿರೋ ಮುತ್ತಜ್ಜ ಕಟ್ಟಿದ ಹಳೇ ಮನೆ. ಊರಿಗೆ 12 ಮನೆ, ದಿನಕ್ಕೆ 4 ಬಸ್ಸು. ಆಸ್ಪತ್ರೆ ಶಾಲೆ ಬೇಕು ಅಂದ್ರೆ 20 ಮೈಲು ದೂರದ ಜಿಲ್ಲಾಕೇಂದ್ರಕ್ಕೆ ಹೋಗ್ಬೇಕು. ಆ ಮನೆಯ ಸ್ಥಿತಿಯೋ ಆ ದೇವರಿಗೆ ಪ್ರೀತಿ. ನೂರಕ್ಕೂ ಹೆಚ್ಚು ಮಳೆಗಾಲ ಕಂಡಿರುವ ಮನೆ, ಈಗಲೋ ಆಗಲೋ ಕುಸಿಯುವ ಸ್ಥಿತಿಯಲ್ಲಿತ್ತು.

ಈಗ್ಗೆ ಸುಮಾರು ಐದಾರು  ವರ್ಷದ ಹಿಂದೆ ಸರಕಾರ ಮುಗಿಲಗಿರಿ ಮತ್ತು ಸುತ್ತಮುತ್ತಲ 200 ಚದರ ಮೈಲು ಕಾಡನ್ನ ಹುಲಿ ಸಂರಕ್ಷಿತ ಪ್ರದೇಶ ಅಂತ ಘೋಷಣೆ ಮಾಡಿತ್ತು. ಮಂಜಪ್ಪನ ಕಷ್ಟಗಳು ಶುರುವಾಗಿದ್ದೆ ಆಗ. ಕಾನೂನಿನ ಪ್ರಕಾರ ಮಂಜಪ್ಪ ತನ್ನ 200 ಮರದ ಅಡಿಕೆ ತೋಟ ಹಾಗೂ ಮನೆ ಬಿಟ್ಟು ಒಕ್ಕಲು ಏಳಬೇಕಾಯ್ತು.

ಒಂದು ರೀತಿಯಲ್ಲಿ ಇದು ಒಳ್ಳೆಯದೇ ಆದರೂ ಸರಕಾರ ಕೊಡುವ ದುಡ್ಡು ಯಾತಕ್ಕೂ ಸಾಲಲ್ಲ ಅಂತ ಮಂಜಪ್ಪಂಗೆ ಗೊತ್ತಿತ್ತು. ಆಗತಾನೆ ಡಿಗ್ರೀ ಮುಗಿಸಿ ಮನೆಗೆ ಬಂದಿದ್ದ ಮಂಜಪ್ಪನ ಮಗ ಗಿರೀಶನಿಗೆ ಸರ್ಕಾರದ ರೀತಿ ಸರಿ ಕಾಣಲಿಲ್ಲ. ನಮ್ಮ ಮನೆ, ನಮ್ಮ ಜಾಮೀನು ಯಾಕೆ ನಯಾಪೈಸೆ ಬೆಲೆಗೆ ಸರಕಾರಕ್ಕೆ ಕೊಡ್ಬೇಕು ಅಂತ.

ಗಿರೀಶ ಸುತ್ತಮುತ್ತಲ ಊರಿನ ಹತ್ತು  ಹನ್ನೆರಡು ಹುಡುಗರನ್ನ ಸೇರಿಸಿ ಜಿಲ್ಲಾ ಕೇಂದ್ರಕ್ಕೆ ದೂರು ಕೊಟ್ಟ, ನ್ಯೂಸ್ಪೇಪರ್ಗೆ ಬರ್ದು ಹಾಕ್ದ. ಎಲ್ಲೂ ಏನೂ ಉತ್ತರ ಬರ್ಲಿಲ್ಲ. ಪ್ರತಿಭಟನೆ ಮಾಡ್ದ, ಕೊನೆಗೆ ಒಂದ್ ದಿನ ಪೊಲೀಸಿನವ್ರು ಮನೆಗೆ ಹುಡ್ಕ್ಕೊಂಡು ಬಂದ್ರು. ಗಿರೀಶ ಮತ್ತವನ ತಂಡ ಪೋಲೀಸ್ ಸ್ಟೇಶನ್ಗೆ ಬೆಂಕಿ ಹಚ್ಚಿ ಬಂದಿದ್ರು. ಗಿರೀಶ ಅವತ್ತು ಕಾಣೆ ಆದವ್ನು ಮತ್ತೆ ಮನೆಗೆ ಬರ್ಲೇ ಇಲ್ಲ.

ಮುಂದಿನ ವಾರದ ಸಂತೇಲಿ ನಕ್ಸಲರ ಕರಪತ್ರಗಳು ಸಿಕ್ಕಿದ್ವು. ನಮ್ಮ ಜೊತೆ ಕೈ ಜೋಡ್ಸಿ, ನಿಮಗೆ ನಿಮ್ಮ ಭೂಮಿ ಬಿಡಿಸಿ ಕೊಡ್ತೀವಿ ಅಂತ. ಮತ್ತೆ ಪೋಲೀಸ್ನವ್ರು ಬಂದ್ರು, ಮನೆ ಮನೆ ಹುಡ್ಕಿದ್ರು. ಕೇಂದ್ರ ಸರಕಾರ ಗನ್ ಹಿಡ್ಕೊಂಡಿರೋ ಪೋಲೀಸ್ನ ಕಳುಹಿಸ್ತು. ಕೂಂಬಿಂಗ್ ಅದು ಇದು ಅಂತ ಊರಿನ ತುಂಬಾ ಪೊಲೀಸರು. ಆದ್ರೂ ಮಂಜಪ್ಪ ನನ್ನ ಮಗ ನಕ್ಸಲ್ ಆಗಿದಾನೆ ಅಂತ ನಂಬೋಕೆ ತಯಾರಿಲ್ಲ. ಎಷ್ಟೋ ವಿಷಯಗಳನ್ನ ರಾಧಮ್ಮನಿಂದ ಮುಚ್ಚಿಟ್ಟಿದ್ದ.


ಆಗತಾನೇ ಮಳೆಗಾಲ ಶುರು ಆಗಿತ್ತು. ಜೋರಾಗಿ ಮಳೆ ಸುರೀತಾ ಇತ್ತು. ರಾತ್ರಿ ಜೋರಾಗಿ ಬಾಗಿಲು ಬಡಿದ ಸದ್ದು. ರಾಧಮ್ಮ ಬಾಗಿಲು ತೆಗೆದು ನೋಡಿದ್ರೆ ಬಾಗಿಲಲ್ಲಿ ಮಗ ನಿಂತಿದಾನೆ. ರಾಧಮ್ಮಂಗೆ ಖುಷಿಯೋ ಖುಷಿ. ಆದ್ರೆ ಆ ಖುಷಿ ಜಾಸ್ತಿ ಕ್ಷಣ ಉಳೀಲಿಲ್ಲ. ಮಗನ ಹಿಂದೆ 4 ಯುವಕರು ಗನ್ ಹಿಡ್ಕೊಂಡ್ ನಿಂತಿದ್ರು. ಒಳಗೆ ಬಂದ ಮಗ ಅಪ್ಪನ್ನ ಎಬ್ಸು ಅಂದ. ಅಪ್ಪನ ಹತ್ರ ಬೇರೆ ಕಾಡಿಗೆ ಹೋಗೋಕೆ ಹೋಗ್ತಾ ಇದೀವಿ. ಸ್ವಲ್ಪ ದಿನಸಿ ಪದಾರ್ಥ ಬೇಕು ಕೊಡಿ ಅಂದ. ಅಪ್ಪನ ಮಾತಿಗೂ ಕಾಯದೆ ಗಂಟು ಕಟ್ಟಿ ಸಿಕ್ಕಿದ್ದು ಎತ್ಕೊಂಡ್ ಹೋದ. ಮಂಜಪ್ಪ ರಾಧಮ್ಮಂಗೆ ಏನಾಯ್ತು ಅಂತ ಅರ್ಥ ಆಗೋಕೆ ಸುಮಾರು ಹೊತ್ತೇ ಬೇಕಾಯ್ತು. ಅಷ್ಟ್ರಲ್ಲಿ ಮಗ ಹೊರ್ತೋಗಿದ್ದ.

ಬೆಳಗ್ಗೆ ಪೊಲೀಸಿನವ್ರು ಬಂದ್ರು, ನಿನ್ನೆ ರಾತ್ರಿ ನೆಡೆದ ಪೋಲೀಸ್ ನಕ್ಸಲ್ ಚಕಮಕಿಯಲ್ಲಿ ನಿಮ್ಮ ಮಗ ಒಬ್ಬ ಪೊಲೀಸಿನವ್ರನ್ನ ಹೊಡೆದುಉರುಳಿಸಿದ್ದಾನೆ, ನಿಮ್ಮ ಮಗ ಮನೆಗೆ ಬಂದ್ರೆ ನಮಗೆ ತಕ್ಷಣ ವರದಿಮಾಡಿ ಅಂದ್ರು. ಮಂಜಪ್ಪ ಕುಸಿದು ಕುಳಿತ. ಒಳ್ಳೆ ಸರ್ಕಾರಿ ಕೆಲಸ ಹಿಡೀತಾನೆ ಮಗ ಅಂತ ಕನಸು ಕಟ್ಕೊಂಡಿದ್ರೆ ಈಗ ಪೊಲೀಸಿನವ್ರನ್ನ ಕೊಂದು ಕೊಲೆಗಾರ ಆಗಿದಾನೆ ಅಂತ. ಹೆಂಡತಿಗೆ ಹೇಳಿದ್ರೆ ಎಲ್ಲಿ ಏನಾಗತ್ತೋ ಅಂತ ಅವ್ಳಿಗೆ ಹೇಳಲೂ ಇಲ್ಲ. ಒಳಗೊಳಗೇ ನೋವು ಅನುಭವಿಸತೊಡಗಿದ.

ಹೀಗೆ ಸುಮಾರು ದಿನಗಳು ಕಳೆದವು. ಮಳೆಗಾಲದ ಕೊನೆ ಕೊನೆಗೆ ಬಂದಿತ್ತು. ಇದ್ದ 200 ಅಡಕೆ ಮರದ ಕೊನೆ ಇಳಿಸೋ ಕೆಲ್ಸ ಶುರು ಮಾಡ್ಬೇಕಿತ್ತು. ಆದ್ರೆ ಇವನಿಗೆ ಯಾವ್ದ್ರಲ್ಲೂ ಆಸಕ್ತಿ ಇಲ್ಲ. ಇದ್ದ ಒಬ್ಬ ಮಗನೂ ಮನೆ ಬಿಟ್ಟು ಕಾಡು ಸೇರ್ಕೊಂಡ್ಮೇಲೆ ಯಾರಿಗಾಗಿ ದುಡ್ಡು ಮಾಡ್ಬೇಕು, ಯಾರಿಗೋಸ್ಕರ ಬದುಕ್ಬೇಕು ಅಂತ ಯೋಚನೆ ಮಾಡ್ತಿದ್ದ. ಒಳಗೊಳಗೇ ಕುಸೀತಿದ್ದ.

ಕೊನೆಗೆ ಒಂದು ದಿನ ಮನಸ್ಸು ಮಾಡಿ ಮಗನ್ನ ನೋಡೋಕೆ ಬೆಂಗಳೂರಿಗೆ ಹೊರಟ. ಅವ್ರ ಇವ್ರ ಕಾಲು ಹಿಡಿದು ಮಗನ್ನ ಸಂಧಿಸಿದ. ಮಗನ ಮುಖದಲ್ಲಿ ಒಂದುಚೂರು ತಪ್ಪಿಸ್ಟಸ್ತ ಭಾವನೆ ಇರ್ಲೇ ಇಲ್ಲ. ಮಗ ಹೇಳಿದ. ಅಪ್ಪ ಪೊಲೀಸಿನವ್ರು ನನ್ನ ಹಿಡೀಲಿಲ್ಲ.  ಸೀತಕ್ಕ ಮತ್ತೆ ಒಂದಿಬ್ರು ಬುದ್ದಿಜೀವಿಗಳು ನನ್ನ ಶರಣಾಗತಿ ಮಾಡ್ಸಿದಾರೆ. ಸರ್ಕಾರದಿಂದ ನನಗೆ 3 ಲಕ್ಷ ದುಡ್ಡು, ಬಡ್ಡಿ ರಹಿತ ಸಲ ಎಲ್ಲ ಸಿಗ್ತಿದೆ, ನಡಿ ನಮ್ಮೂರಿಗೆ ಹೋಗಿ ಜಮೀನು  ತಗೊಂಡು ಬೇಸಾಯ ಮಾಡೋಣ ಅಂದ.

ಮಂಜಪ್ಪಂಗೆ ಎಲ್ಲಿಲ್ಲದ ಕೋಪ ಬಂತು. ಅನ್ನ ತಿನ್ನೋ ಮಕ್ಕಳೇ ಬದುಕೊದಿಲ್ಲ ಇನ್ನೂ ವಿಷ ತಿನ್ನೋ ಮಕ್ಳು ಬದುಕ್ತಾರ, ನನಗೆ ಸರ್ಕಾರದ ಭಿಕ್ಷೆ ಬೇಡ. ನೀನು ಜನರ ಕೊಲೆ ಮಾಡಿರೋನು, ಪಶ್ಚಾತಾಪ ಪಡೋದು ಬಿಟ್ಟು, ಯಾರೋ ಪೇಪರ್ನವರ ಮಾತು ಕೇಳ್ಕೊಂಡು ಸರ್ಕಾರದ ದುಡ್ಡು ತಗೊಳ್ತಾ ಇದೀಯಾ. ನೀನು ಶಿಕ್ಷೆ ಅನುಭವಿಸಬೇಕು. ನನ್ನ ಇಡೀ ವಂಶಸ್ತರು ನಿಯತ್ತು ಮಾನಕ್ಕೆ ಬದುಕಿದೋರು, ನಿನ್ನ ಈ ಪಾಪದ ದುಡ್ಡು ಬೇಡ, ಇನ್ನೂ ನಿನಗೂ ನನಗೂ ಸಂಬಂಧ ಇಲ್ಲ. ಮತ್ತೆ ಮನೆ ಕಡೆ ಬರೋ ಪ್ರಯತ್ನ ಮಾಡ್ಬೇಡ ಅಂತ ಹೇಳಿ ಸಂಜೆ ಇದ್ದ ಕೊನೇ ಬಸ್ಸಿಗೆ ಊರಿಗೆ ಹೊರಟ.

ಮನೆಗೆ ಬಂದು ಇನ್ನು ನಿನಗೂ ನಿನ್ನ ಮಗನಿಗೂ ಈ ಮನೆಗೂ ಋಣ ಮುಗೀತು. ನಾವು ಸರ್ಕಾರದ ಪರಿಹಾರ ಧನ ತಗೊಂಡು ಬೇರೆ ಕಡೆ ಮನೆ ಮಾಡ್ಕೋಳೋಣ ಅಂತ ಹೇಳಿ, ತಹಶೀಲ್ದಾರರ ಹತ್ತಿರ ಹೊರಟ. ಒಳಮನೆಯಲ್ಲಿ ರಾಧಮ್ಮ ಮುಸು ಮುಸು ಆಳುವ ಸದ್ದು ಮಳೆಯ ಚಿಟಿಪಿಟಿ ಸದ್ದಿನೊಳಗೆ ಸದ್ದಾಗಿ ಹೋಯ್ತು.

ಗುರುವಾರ, ಮಾರ್ಚ್ 26, 2015

The Story of my Bullet

It was around July 2009, That was when I first met Phani. we had one big common dream, Bullet!! one day in August, we got down from the bus and went to the New Royal Enfield Showroom in BSK 2nd stage. Those days people didn't have this craze to buy bullets. people were happy with Pulsar!

Me and Phani had one big dream, to buy a bullet and Roam around the country on it..! on that day, I went and sat on a Classic 350 Black. that was the first time my bums were on an Enfield. I felt heaven! that moment made my decisions firm that my first ever vehicle will be an Enfield..!

We used to admire every Bullet and its Rider on the road! that thump, that thug thug touched deep inside our hearts!! it was more than our own heart beats! I started researching on the different variants of RE, Specs, Price. At that time a C350 would cost 1,10,000 INR.

later I joined B.E. my college was just a 2km away from home, I was riding my brother's Activa at that time. so even though I wanted to buy an RE, there were 2 obstacles. One, my Dad didn't want me to ride a bike due to my eye problems, two, I wanted to buy it in my own earned money. so I had to wait till 2014 to start earning. By then I had collected all info about all variants of RE thru internet, visiting store multiple times, sitting to get a feel of those machines and my mind was firm about buying a ThunderBird 350.

by Feb 2014 I had a job in hand, but my joining day was In Aug. More wait was inevitable. by May I made up my mind to book a TBTS 350 so that I can get the delivery by Oct. I went to the same BSK 2nd stage showroom for Test Riding of TBTS 350 and booked it by paying 5000 cash. by then my dear friend Hemanth had a booked a Bullet 500, and after I booked, my cousin brother Harsha booked a Bullet 500 too.

I test rode Electra again felt this is best suited for City rides and very comfortable for long rides. so I decided to change my booking to Electra aka Bullet 350. Phani took a test ride of both TBTS350 and Electra, he gave thumbs up for Electra 350. and the Fact that Electra is the actual bullet and classic is not boosted my love towards Electra. I changed my bookings to Royal Enfield Brand Store, Jayanagar as they were more customer oriented.

after a wait for 4 longs months, my Electra was delivered to me on Nov 6th. mind you, I had never ridden a geared a bike for more than a km till then. Phani always told me that, if u can buy Bullet, you can Ride it too. it cost me1,32,000 On Road.

Took it home, made all the Pooja. it took me a couple of days to get adjusted to the weight and gears, clutch, disc brakes everything. but now, its been 5 months since I own this Bullet, when I am Riding it, I don't listen to my heart beat, I listen to the thump of it. I love it more than I love myself. 3000+km on the ODO and I am craving for more! two big rides coming in next months!! Once Phani buys an RE, it will be us and my other close friends riding throughout the country to different places, roads, ghats and where not!

ಬುಧವಾರ, ಮಾರ್ಚ್ 25, 2015

ಅಡಿಗಾಸ್ ವಿಜಯ

ಸುಮಾರು 2004-05 ರ ಕಾಲ. ಬೆಂಗಳೂರಿನ BHSS ಶಾಲೆಯಲ್ಲಿ ಹೈಸ್ಕೂಲ್ ಓದುತ್ತಿದ್ದ ಸಮಯ. ಶಾಲೆಯ ಪಕ್ಕದ ವಿಜಯ ಕಾಲೇಜಿನಲ್ಲಿ ಅಡಿಗಾಸ್ ಹೋಟೆಲ್ಲು ನೆಡೀತಿತ್ತು. ಹೊರಗೆ ಹೋಟೆಲ್ಲು, ಕಾಂಪೌಂಡ್ ಒಳಗೆ ಕ್ಯಾಂಟೀನ್. ಹೊರಗಿಗಿಂತ ಒಳಗೆ ಒಂದು ರೂಪಾಯಿ ಕಡಿಮೆ. ಅಡಿಗಾಸ್ ಅಂದ್ರೆ ಇಡ್ಲೀ ವಡೆ, ಇಡ್ಲೀ ವಡೆ ಅಂದ್ರೆ ಅಡಿಗಾಸ್. ಐದು ರುಪಾಯಿಗೆ 2 ಇಡ್ಲೀ, ಒಂದಕ್ಕೆ ಎರಡೂವರೆ ರೂಪಾಯಿ. ಆಹಾ ಎಂತ ಸಾಂಬಾರ್ ಅಂದ್ರೆ ನೆನೆಸಿಕೊಂಡ್ರೆ ಈಗಲೂ ಬಾಯಲ್ಲಿ ನೀರು ಬರತ್ತೆ. ಒಂದು ಇಡ್ಲೀಗೆ 3 ಬಾರಿ ಸಾಂಬಾರ್ ಹಾಕ್ಸಿಕೊಂಡು ತಿಂತಾ ಇದ್ವಿ. ದುಡ್ಡಿಲ್ಲ ಅಂತ ಅಲ್ಲ, ಸಾಂಬಾರ್ ಸೆಳೆತ. ಮದ್ಯಾಹ್ನ ಆದ್ರೆ ಸಾಕು ಜೋಬಲ್ಲಿ ದುಡ್ಡಿದೆಯಾ ನೋಡ್ಕೊಂಡು ಕ್ಯಾಂಟೀನ್ ಕಡೆ ಹೆಜ್ಜೆ ಹಾಕ್ತಿದ್ವಿ. ಇವತ್ತು ಸೌತಿಂಡೀಸ್ ಅಲ್ಲಿ ಇಡ್ಲೀ ತಿನ್ಬೆಕಾದ್ರೆ ನೆನಪಾಯ್ತು. ಕಾಲ ಎಷ್ಟು ಬದ್ಲಾಗಿದೆ ಅಂದ್ರೆ ಎರಡೂವರೆ ರೂಪಾಯಿ ಇಡ್ಲೀಗೆ 3 ಸಾರಿ ಸಾಂಬಾರ್ ಹಾಕ್ತಾ ಇದ್ರು, ಈಗ 10 ರೂಪಾಯಿ ಇಡ್ಲೀಗೆ ಒಂದು ಸೌಟು ಸಾಂಬಾರ್ ಹಾಕಕ್ಕೆ ಹಿಂದೆ ಮುಂದೆ ನೋಡ್ತಾರೆ. Those times will never come back!!